Photos of R S Iyer Tumkur

*ಆರ್.ಎಸ್.ಅಯ್ಯರ್ ಫೋಟೋಗಳು :- http://rsiyertumkur.blogspot.com *ಡಿವಿಜಿ ನೆನಪು ಕಾರ್ಯಕ್ರಮ:-https://sarasdvgnenapu.blogspot.com *ವಿಶ್ವನಾಥನ್ ಪತ್ರಗಳು https://vishwanathanletters.blogspot.com

Tuesday, 15 March 2022

ತುಮಕೂರಿನ ಸ್ವಾತಂತ್ರ್ಯ ಚೌಕ - ಧ್ಯೇಯ ಕಮಲ ಮಾಸ ಪತ್ರಿಕೆ- ಮಾರ್ಚ್ 2022 Swatantrya Chouka, Tumakuru- Dhyeyakamala

 "ಸ್ವಾತಂತ್ರ್ಯ ಚೌಕ"- ಇದು 'ನಮ್ಮ ತುಮಕೂರು' ನಗರದ ಒಂದು ಹೆಮ್ಮೆಯ ಸ್ಥಳ. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಪೊಲೀಸರ ಗುಂಡೇಟಿಗೆ ಎದೆಯೊಡ್ಡಿ ನಾಲ್ವರು ದೇಶಭಕ್ತರು ಹುತಾತ್ಮರಾದ ಶ್ರೇಷ್ಠ ಸ್ಥಳ. ನಾಡಿನ ಖ್ಯಾತ ಸಾಹಿತಿ ದಿ. ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ಏಕೈಕ ಸುಪುತ್ರ ಶ್ರೀ ರಾಮಚಂದ್ರ ಅವರು ಈ ನಾಲ್ವರು ಹುತಾತ್ಮರಲ್ಲೊಬ್ಬರೆಂಬುದು ಗಮನೀಯ.

"ಧ್ಯೇಯ ಕಮಲ" ಮಾಸ ಪತ್ರಿಕೆಯ ಸಂಪಾದಕರೂ, ಆತ್ಮೀಯರೂ ಆದ ಶ್ರೀ ಬಿದರೆ ಪ್ರಕಾಶ್ ರವರ ಕೋರಿಕೆಯಂತೆ "ಸ್ವಾತಂತ್ತ್ಯ ಚೌಕ"ದ ಇತಿಹಾಸ ಕುರಿತು ನಾನು ಬರೆದ ಲೇಖನ ಈ ತಿಂಗಳ (ಮಾರ್ಚ್, 2022) "ಧ್ಯೇಯ ಕಮಲ"ದಲ್ಲಿ ಪ್ರಕಟವಾಗಿದೆ. ಶ್ರೀಯುತ ಬಿದರೆ ಪ್ರಕಾಶ್ ರವರ ವಿಶ್ವಾಸಕ್ಕೆ ಕೃತಜ್ಞತೆಗಳು. ಅಂದ ಹಾಗೆ ಈ ಪತ್ರಿಕೆಯನ್ನು ಕರ್ನಾಟಕ ಬಿ.ಜೆ.ಪಿ. ಪ್ರಕಟಿಸುತ್ತದೆ.






Thursday, 25 November 2021

ಶ್ರೀ ಜಿ.ಎಂ.ರಾಜಾಚಾರ್ ರವರ ಬಗ್ಗೆ ಲೇಖನ- 'ಧ್ಯೇಯಕಮಲ'- ನವೆಂಬರ್ 2021- Article Sri G M Rajachar, 'Dhyeya Kamala' Magazine

 ಸಜ್ಜನಿಕೆ-ಸಾತ್ವಿಕತೆಯ ಶ್ರೀ ಜಿ.ಎಂ.ರಾಜಾಚಾರ್ ರವರು....

-------------------------------------------------
ಬಿಜೆಪಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎಲ್ಲ ಪ್ರಮುಖ ನಾಯಕರ ಅತಿ ಹತ್ತಿರದ ಒಡನಾಟವಿದ್ದರೂ, ಆ ಯಾವುದೇ ಪ್ರಭಾವವನ್ನೂ- ಪರಿಚಯವನ್ನೂ ಕಿಂಚಿತ್ತೂ ದುರುಪಯೋಗಪಡಿಸಿಕೊಳ್ಳದೆ ಬಿಜೆಪಿಯಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವುದರಲ್ಲೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದವರೆಂದರೆ “ನಮ್ಮ ತುಮಕೂರು” ನಗರದ ಚಿಕ್ಕಪೇಟೆಯ ಆಚಾರ್ಯರ ಬೀದಿ ನಿವಾಸಿಗಳಾಗಿದ್ದ ದಿವಂಗತ ಶ್ರೀ ಜಿ.ಎಂ.ರಾಜಾಚಾರ್ ರವರು.
ಬಿಜೆಪಿಯ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗಳಾಗಿದ್ದ ಅವರು, ಪತ್ರಕರ್ತರೂ ಆಗಿದ್ದವರು. ಅವರನ್ನು ನೆನೆದಾಗಲೆಲ್ಲ ಮನದಲ್ಲಿ ಮೂಡುವುದು ಅವರ ಸಜ್ಜನಿಕೆ ಹಾಗೂ ಸಾತ್ವಿಕ ವ್ಯಕ್ತಿತ್ವ. ಅವರನ್ನು ಕುರಿತು ನಾನು ಬರೆದಿರುವ ಒಂದು ಪುಟ್ಟ 'ಸ್ಮೃತಿ ಲೇಖನ' ರಾಜ್ಯ ಬಿಜೆಪಿ ಪ್ರಕಟಿಸುವ “ಧ್ಯೇಯ ಕಮಲ” ಮಾಸ ಪತ್ರಿಕೆಯಲ್ಲಿ ಈ ತಿಂಗಳು ಪ್ರಕಟವಾಗಿದೆ.
ಲೇಖನ ಬರೆಯುವಂತೆ ಪ್ರೇರೇಪಿಸಿದ ಹಾಗೂ ಅದನ್ನು ಪ್ರಕಟಿಸಿದ “ಧ್ಯೇಯ ಕಮಲ”ದ ಸಂಪಾದಕರೂ, ಆತ್ಮೀಯ ಮಿತ್ರರೂ ಆದ ಶ್ರೀ ಬಿದರೆ ಪ್ರಕಾಶ್ ರವರಿಗೆ ಅನಂತ ಧನ್ಯವಾದಗಳು.
-ಆರ್.ಎಸ್.ಅಯ್ಯರ್, ತುಮಕೂರು, 25-11-2021